ಪರಿಪೂರ್ಣತೆ ಎಂದರೇನು? ಆದಿ ಶಂಕರಾಚಾರ್ಯರು ಬೋಧಿಸಿದ ಪೂರ್ಣತ್ವ ಸಾರ

Webee Cafe
ಪರಿಪೂರ್ಣತೆ ಎಂದರೇನು? ಆದಿ ಶಂಕರಾಚಾರ್ಯರು ಬೋಧಿಸಿದ ಪೂರ್ಣತ್ವ... (ಸಾರ)

1.ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು... ನೀನು ಬದಲಾದರೆ.. ಅದು ಪರಿಪೂರ್ಣತೆ .2.ಜನ ಹೇಗಿದ್ದಾರೋ..ಹಾಗೆಯೇ ಸ್ವೀಕರಿಸಿದರೆ.... ಅದು ಪರಿಪೂರ್ಣತೆ . 3.ಪ್ರತಿಯೊಬ್ಬರೂ...ಅವರ ದಾರಿಯಲ್ಲಿ
ಅವರು ಸರಿಯಿದ್ದಾರೆ...ಎಂದು ತಿಳಿದರೆ...
ಅದು ಪರಿಪೂರ್ಣತೆ.

4.ಎಲ್ಲರೊಂದಿಗೂ ಹೊಂದಾಣಿಕೆಯಿಂದ
ನೀನೂ ಹೊರಟರೆ...ಅದು ಪರಿಪೂರ್ಣತೆ .

5.ಬೇರೆಯವರಿಂದ ನೀನು ಅಪೇಕ್ಷಿಸುವುದನ್ನು ಬಿಟ್ಟರೆ.. ಅದು ಪರಿಪೂರ್ಣತೆ.

6.ನೀನು ಮಾಡುತ್ತಿರುವ ಕೆಲಸದಿಂದ ನಿನಗೆ ಆತ್ಮವಿಶ್ವಾಸ ಮತ್ತು ಶಾಂತಿ ಸಿಕ್ಕರೆ....
ಅದು ಪರಿಪೂರ್ಣತೆ.

7.ನಿನ್ನ ಜಾಣ್ಮೆ ಹಾಗೂ ಶಕ್ತಿಯನ್ನು
ಪ್ರದರ್ಶಿಸುವುದನ್ನು ನಿಲ್ಲಿಸಿದರೆ...
ಅದು ಪರಿಪೂರ್ಣತೆ .

8.ಮತ್ತೊಬ್ಬರು ನಿನ್ನನ್ನು ತೆಗಳಿದಾಗ
ಸ್ವೀಕರಿಸುವ ಗುಣವಿದ್ದರೆ....
ಅದು ಪರಿಪೂರ್ಣತೆ.

9.ನಿನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಟ್ಟರೆ....
ಅದು ಪರಿಪೂರ್ಣತೆ .

10.ನಿನ್ನಲ್ಲಿ ನಿನಗೆ ಭರವಸೆ ಇದ್ದು
ಶಾಂತನಾಗಿ ಇರಲು ಸಾಧ್ಯ ವಾದರೆ ....
ಅದು ಪರಿಪೂರ್ಣತೆ .

11.ನೀನು ನಿನ್ನ ಜೀವನದ ಅವಶ್ಯಕತೆ
ಮತ್ತು ಬೇಕು" ಗಳನ್ನು ಬೇರ್ಪಡಿಸಿ
ನೋಡಲು ಶಕ್ತನಾಗಿ "ಬೇಕು"ಗಳನ್ನು
ತ್ಯಾಗ ಮಾಡಿದರೆ....ಅದು ಪರಿಪೂರ್ಣತೆ .

ಇನ್ನೊಂದು ಪ್ರಮುಖ ಅಂಶ

12.ಪ್ರತಿಯೊಂದು ವಸ್ತು ,ವ್ಯಕ್ತಿ,
ವಿಷಯಗಳಿಂದಲೇ ಸುಖ-ಸಂತೋಷ
ಸಿಗುವುದೆಂದು ನಂಬುವುದನ್ನು ಬಿಟ್ಟರೆ....
ಅದು ಪರಿಪೂರ್ಣತೆ.

ಪರಿಪೂರ್ಣ ಜೀವನದತ್ತ ಸಾಗುವ
ಪ್ರಯತ್ನ ಮಾಡೋಣ ಬನ್ನಿ...

Leave a reply